ತೆಲುಗಿನ ಖ್ಯಾತ ನಟರೊಬ್ಬರು, ‘ಸಮಂತಾ ಥರದ ಹುಡುಗಿ ಸಿಕ್ಕರೆ ಮದುವೆ ಆಗೋಕೆ ಸಿದ್ಧ’

Friday, February 7th, 2020
sumantha

ನಟಿ ಸಮಂತಾ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ನೋಡಿ, ನಂತರ ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಿ ಈಗ ಸುಂದರ ಸಂಸಾರಕ್ಕೆ ಸಾಕ್ಷಿಯಾಗಿದ್ದಾರೆ. ನಾಗಚೈತನ್ಯ ಅವರನ್ನು ವರಿಸಿದ ನಂತರವೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ. ಹೀಗಿರುವಾಗ ತೆಲುಗಿನ ಖ್ಯಾತ ನಟರೊಬ್ಬರು, ‘ಸಮಂತಾ ಥರದ ಹುಡುಗಿ ಸಿಕ್ಕರೆ ಮದುವೆ ಆಗೋಕೆ ಸಿದ್ಧ’ ಎಂದಿದ್ದಾರೆ! ಈ ರೀತಿ ಹೇಳಿಕೆ ನೀಡಿರುವುದು ನಟ ಶರ್ವಾನಂದ್. ಅಷ್ಟಕ್ಕೂ ಸಮಂತಾ ಥರದ ಹುಡುಗಿಯೇ ಯಾಕೆ ಬೇಕು? ಅದಕ್ಕೂ ಕಾರಣ ಇದೆ. ಅಂದಹಾಗೆ, ಅವರು ಹೇಳಿದ್ದೇನೆಂದರೆ, […]

ಕಿಚ್ಚ ಸುದೀಪ್ ನಿರ್ದೇಶನದ ಕಡೆ ಒಲವು ತೊಡುತ್ತಿರುವುದು ‘ಈ’ ಚಿತ್ರಕ್ಕಾ.?

Monday, November 18th, 2019
kiccha-sudeep

‘ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ ಬರೀ ನಟ ಮಾತ್ರ ಅಲ್ಲ.. ಉತ್ತಮ ನಿರ್ದೇಶಕ ಕೂಡ ಹೌದು. ‘ಮೈ ಆಟೋಗ್ರಾಫ್’, ‘#73 ಶಾಂತಿನಿವಾಸ’, ‘ವೀರ ಮದಕರಿ’, ‘ಜಸ್ಟ್ ಮಾತ್ ಮಾತಲ್ಲಿ’, ‘ಕೆಂಪೇಗೌಡ’ ಮತ್ತು ‘ಮಾಣಿಕ್ಯ’ ಚಿತ್ರಗಳನ್ನ ನಿರ್ದೇಶನ ಮಾಡಿರುವ ಸುದೀಪ್ ಇದೀಗ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರಂತೆ ಎಂಬ ಗುಸು ಗುಸು ನಿನ್ನೆಯಷ್ಟೇ ಗಾಂಧಿನಗರದಲ್ಲಿ ಕೇಳಿಬಂದಿತ್ತು. ಡೈರೆಕ್ಟರ್ ಸೀಟ್ ಮೇಲೆ ಸುದೀಪ್ ಕುಳಿತು ಐದು ವರ್ಷಗಳಾಗಿವೆ. ನಟನೆಯಿಂದ ಬ್ಯಾಕ್ ಟು ಬ್ಯಾಕ್ ಹಿಟ್ ಕೊಡುತ್ತಾ ಬರುತ್ತಿರುವ ಸುದೀಪ್ ಇದೀಗ […]

ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಎಂಟ್ರಿ..!

Saturday, May 26th, 2018
abhishek

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಚಿತ್ರರಂಗ ಎಂಟ್ರಿಗೆ ಎಲ್ಲ ರೀತಿಯಲ್ಲಿ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಅಭಿಷೇಕ್‌ ನಟನೆಯ ಮೊದಲ ಚಿತ್ರ ‘ಅಮರ್’ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸಖತ್ ಸ್ಟೈಲಿಷ್ ಆಗಿ ರಗಡ್ ಲುಕ್ ಕೊಡ್ತಿರೋ ಅಭಿಷೇಕ್ ಫಸ್ಟ್ ಪೋಸ್ಟರ್‌ನಲ್ಲೇ ಮೋಡಿ ಮಾಡ್ತಿದ್ದಾರೆ. ಈ ಯಂಗ್ ಸ್ಟಾರ್ ಖಂಡಿತಾ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೊಂದು ಛಾಪು ಮೂಡಿಸ್ತಾರೆ ಎಂದು ಮಾತನಾಡುತ್ತಿದೆ ಗಾಂಧಿನಗರ. ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿಬರ್ತಿರೋ ಅಮರ್‌ಗೆ ನಾಗಶೇಖರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ […]

ಸಿನಿಮಾ ಬದುಕಿನ ವಾಸ್ತವಕ್ಕೆ ಕನ್ನಡಿ ಹಿಡಿದ ಶ್ರೀದೇವಿ ಅಂತ್ಯ

Wednesday, February 28th, 2018
actor

ಕೊನೆಗೂ ನಟಿ ಶ್ರೀದೇವಿಯ ಸಾವಿನ ಕುರಿತಂತೆ ಇದ್ದ ಸಂಶಯ ದೂರವಾಗಿದೆ. ‘ಶ್ರೀದೇವಿ ಅವರ ಸಾವು ಈ ಮೊದಲು ಹೇಳಿದಂತೆ ಹೃದಯ ಸ್ತಂಭನದಿಂದ ನಡೆದಿಲ್ಲ, ‘ಬಾತ್ ಟಬ್‌ನಲ್ಲಿ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ದುಬೈ ಪೊಲೀಸರೇ ಹೇಳಿಕೆ ನೀಡಿ, ತನಿಖೆಯನ್ನು ಮುಗಿಸಿರುವುದರಿಂದ ಈ ಬಗ್ಗೆ ಎದ್ದಿರುವ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ. ಭಾರತದ ಒಂದು ಕಾಲದ ಸೂಪರ್ ಸ್ಟಾರ್ ಕಲಾವಿದೆಯ ಸಾವಿನ ಕುರಿತಂತೆ ಕುಟುಂಬ ದ್ವಂದ್ವ ಹೇಳಿಕೆಯನ್ನು ನೀಡಿದಾಗ ಅನುಮಾನ ಹುಟ್ಟುವುದು ಸಹಜವೇ ಆಗಿದೆ. ಆಕೆಯ ಪತಿ ಬೋನಿಕಪೂರ್ ಸಹಿತ […]

ಚಂದನ್ ಶೆಟ್ಟಿ-ವೈಷ್ಣವಿ ಗೌಡ ಮದುವೆ ಆಗ್ತಾರಂತೆ.! ಇದು ನಿಜವೇ.?

Tuesday, February 6th, 2018
chandan

‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ವಿನ್ನರ್ ಚಂದನ್ ಶೆಟ್ಟಿ ಸದ್ಯದಲ್ಲೇ ಮದುವೆ ಆಗ್ತಾರಂತೆ. ಇದೇ ತಿಂಗಳು ಚಂದನ್ ಶೆಟ್ಟಿ ನಿಶ್ಚಿತಾರ್ಥ ನಡೆಯಲಿದೆಯಂತೆ. ಹೌದಾ…? ಎಂದು ಕಣ್ಣರಳಿಸುವ ಮುನ್ನ ಮೊದಲು ಹುಡುಗಿ ಯಾರು ಅಂತ ತಿಳಿದುಕೊಳ್ಳಿ… ಚಂದನ್ ಶೆಟ್ಟಿ ಮದುವೆ ಆಗುತ್ತಿರುವ ಹುಡುಗಿ ಹೆಸರು ವೈಷ್ಣವಿ ಗೌಡ ಅಂತೆ. ಯಾರೀ ವೈಷ್ಣವಿ ಗೌಡ ಅಂತೀರಾ.? ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಕಣ್ರೀ.! ಹೀಗಂತ ನಾವು ಹೇಳ್ತಿಲ್ಲ ಸ್ವಾಮಿ… ಒಮ್ಮೆ […]

1500 ಜನರ ಬಾಳಿಗೆ ಬೆಳಕಾದ ಸು’ದೀಪ’!

Thursday, January 25th, 2018
sudeep

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕೇಲವ ಸಿನಿಮಾದಲ್ಲಿ ಮಾತ್ರವಷ್ಟೆಯಲ್ಲ ನಿಜಜೀವನದಲ್ಲಿಯೂ ಅವರು ಹೀರೋ ಆಗಿದ್ದಾರೆ. ಸುದೀಪ್ ತೆಗೆದುಕೊಂಡ ನಿರ್ಯಣಯದಿಂದಾಗಿ 1500 ಜನರು ಇಂದು ನೆಮ್ಮದಿಯಿಂದ ಊಟ ಮಾಡುವಂತಾಗಿದೆ. ಹೌದು, ಕನ್ನಡದ ಬಿಗ್‌ಬಾಸ್‌ ರಿಯಾಲಿಟಿ ಶೋ ಬೆಂಗಳೂರಿನ ಇನ್ನೋವೆಟಿವ್‌ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಶೋ ಬೆಂಗಳೂರಿನಲ್ಲಿ ನಡೆಯಲು ಕಾರಣ ಸುದೀಪ್ ಅವರಂತೆ. ಮೊಟ್ಟ ಮೊದಲ ಬಾರಿಗೆ ಇಲ್ಲಿ ಆಗಮಿಸಿದ್ದ ಸುದೀಪ್ ಅವರು, ನಮ್ಮ ಶೋ ಇಲ್ಲಿಯೇ ನಡೆಯಲಿ. ಇದರ ಲಾಭ […]

ಸಮೀರ್ ಆಚಾರ್ಯ ಮೇಲೆ ಹಲ್ಲೆ, ನಟಿ ಸಂಯುಕ್ತ ಸ್ತ್ರೀ ಕುಲಕ್ಕೆ ಕಳಂಕ: ನಟ ಜಗ್ಗೇಶ್

Thursday, December 21st, 2017
samyukta

ಬೆಂಗಳೂರು: ಕನ್ನಡ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿರುವ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌‌ನಲ್ಲಿ ಭಾಗಿಯಾಗಿರುವ ಸಮೀರ್‌‌ ಆಚಾರ್ಯ್‌‌ ಅವರ ಮೇಲೆ ಕೈ ಮಾಡಿರುವ ನಟಿ ಸಂಯುಕ್ತ ವಿರುದ್ಧ ಈಗಾಗಲೇ ಆಕ್ರೋಶ ವ್ಯಕ್ತವಾಗುತ್ತಿದ್ದು, ನಟ ಜಗ್ಗೇಶ್‌ ಸಹ ಅವರ ವಿರುದ್ಧ ಟ್ವಿಟರ್‌‌ನಲ್ಲಿ ಹರಿಹಾಯ್ದಿದ್ದಾರೆ. ಸಂಯುಕ್ತ ಅವರ ಈ ನಡವಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಟ್ವೀಟ್‌‌ ಮಾಡಿರುವ ಹಿರಿಯ ನಟ ಜಗ್ಗೇಶ್‌‌, ಸಮೀರ್‌ ಆಚಾರ್ಯ ಮೇಲೆ ಕೈ ಮಾಡಿರುವ ಸಂಯುಕ್ತ ಕ್ಷಮೆಗೆ ಅನರ್ಹ. ಸ್ತ್ರೀ ಕುಲಕ್ಕೆ ಈಕೆ ಕಳಂಕ. ಬೆಳೆದ […]

ಶಿವನ ತ್ರಿನೇತ್ರವಾಗಿರುವ ಈ ಪುರಾತನ ವಜ್ರ ಈಗ ಲೆಬನಾನ್ ದೇಶದಲ್ಲಿದೆ?

Wednesday, July 5th, 2017
Third eye

ಮಂಗಳೂರು  : ಭಾರತದಲ್ಲಿರುವ ಅಮೂಲ್ಯ ಪ್ರಾಚೀನ ವಸ್ತುಗಳು ಈಗ ಹೊರ ದೇಶದಲ್ಲಿವೆ. ಕೋಹಿನೂರ್ ವಜ್ರದಿಂದ ಹಿಡಿದು ಇನ್ನೂ ಅನೇಕ ಬೆಲೆ ಬಾಳುವ ಐತಿಹಾಸಿಕ ವಸ್ತುಗಳು ಪರಕೀಯರ ದಾಳಿ ವೇಳೆ ಭಾರತದಿಂದ ಬೇರೆ ದೇಶ ತಲುಪಿದ್ದು ಇಂದಿಗೂ ಅವುಗಳನ್ನು ವಾಪಸ್ ತರಲು ಇಂದಿಗೂ ಸಾಧ್ಯವಿಲ್ಲ. ರಾಜರುಗಳ ಆಡಳಿತ ಕಾಲದಲ್ಲಿ ಇಲ್ಲಿನ ಅದ್ಭುತ ವಸ್ತುಗಳು, ಅನ್ಯದೇಶದ ಸ್ವತ್ತಾಗಿದೆ. ಕೋಹಿನೂರ್ ವಜ್ರವನ್ನಂತೂ ಪುರಾಣ ಪ್ರಸಿದ್ಧ ಶಮಂತಕ ಮಣಿಯೆಂದೇ ಪರಿಗಣಿಸಲಾಗಿದೆ. ಇಂತಹ ಅನೇಕ ವಸ್ತುಗಳು ಈಗ ಎಲ್ಲಿವೆ ಎಂಬುದರ ಬಗ್ಗೆ ಮಾಹಿತಿಯೇ ಲಭ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಶಿವಲಿಂಗವಿರುವ […]

ಕರಿಷ್ಮಾ ಕಪೂರ್ ಎರಡನೇ ಮದುವೆಗೆ ಅರ್ಜಿ

Wednesday, July 9th, 2014
Karishma kapoor

ಬಾಲಿವುಡ್ ತಾರೆ ಕರಿಷ್ಮಾ ಕಪೂರ್ ಅವರು ತನ್ನ ಪತಿ ಸಂಜಯ್ ಕಪೂರ್ ಅವರಿಗೆ ವಿಚ್ಛೇದನ ಕೊಡಲು ನಿರ್ಧರಿಸಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಪರಸ್ಪರ ವಿಚ್ಛೇದನ ಕೋರಿ ಇಬ್ಬರೂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿನ್ನೆಲೆಯಲ್ಲಿ ಕರಿಷ್ಮಾ ಕುರಿತು ತಾಜಾ ಸುದ್ದಿಯೊಂದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿದೆ. ತನ್ನ ಪತಿಯಿಂದ ಸಂಬಂಧ ಕಡಿದುಕೊಳ್ಳುತ್ತಿರುವ ಕರೀಷ್ಮಾ ಈಗಾಗಲೆ ಮತ್ತೊಬ್ಬ ವಿಚ್ಛೇದಿತ ವ್ಯಕ್ತಿಯನ್ನು ಮದುವೆಯಾಗುಲು ಸಿದ್ಧವಾಗುತ್ತಿದ್ದಾರಂತೆ. ಬಾಲಿವುಡ್ ಸಮಾಚಾರದ ಪ್ರಕಾರ, ಕರಿಷ್ಮಾ ಕೈ ಹಿಡಿಯಲಿರುವುದು ಸಂದೀಪ್ ತೋಷ್ನಿವಾಲ್ ಎಂಬುವವರನ್ನು. ಸಂದೀಪ್ ಅವರು […]

ದೀಪಿಕಾಗೆ ಭರ್ಜರಿ ಬ್ರಾಂಡ್‌ ವ್ಯಾಲ್ಯೂ

Friday, March 7th, 2014
pika-Padukone

ಬೆಂಗಳೂರುಃ ಯಶಸ್ಸಿನ ಬೇನ್ನೆರಿ ಹೊರಟಿರುವ ದೀಪಿಕಾ ಪಡುಕೋಣೆಗೆ ಅದೃಷ್ಟ ಕುಲಾಯಿಸಿದೆ. ಕಳೆದ ವರ್ಷ ಆಕೆ ನಟಿಸಿದ ನಾಲ್ಕು ಚಿತ್ರಗಳೂ ಬಾಕ್ಸ್‌ ಆಫೀಸ್‌ನಲ್ಲಿ ಸತತವಾಗಿ ಹಿಟ್ ಆದ ಕಾರಣ ಈಕೆಯ ಬ್ರಾಂಡ್ ವ್ಯಾಲ್ಯೂ ಗಗನಕ್ಕೇರಿದೆ. ಕೋಟಿ ಕೋಟಿ ಹಣ ಆಕೆಯ ಬ್ಯಾಂಕ್ ಖಾತೆಗೆ ಬಂದು ಬಿಳುತ್ತಿದೆ. ಸಾಫ್ಟ್ ಡ್ರಿಂಕ್ ಬ್ರಾಂಡೊಂದು ಆಕೆಗೆ ಒಂದು ವರ್ಷದ ಅವಧಿಗೆ ಬರೋಬ್ಬರಿ 6 ಕೋಟಿ ರೂಪಾಯಿ ರಾಯಲ್ಟಿ ನೀಡಿದೆ. ಹಳೇಯ ನಟಿಯರಿಗೆ ಸೆಡ್ಡು ಹೋಡೆದಿರುವ ದೀಪಿಕಾ ತಮ್ಮ ಖ್ಯಾತಿಯನ್ನು ಬಳಸಿಕೊಂಡು ಒಳ್ಳೆಯ ಹಣ […]