ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ದ ಕಾರ್ಮಿಕ ಸಂಘದ ಪ್ರತಿಭಟನೆ

Tuesday, February 15th, 2011
ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಅವ್ಯವಸ್ಥೆಯ ವಿರುದ್ದ ಪ್ರತಿಭಟನೆ

ಮಂಗಳೂರು : ದ.ಕ. ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಲೇಡಿಗೋಷನ್ ಆಸ್ಪತ್ರೆಯ ಅವ್ಯವಸ್ಥೆ, ಸಿಬ್ಬಂದಿಗಳ ಮತ್ತು ಅಲ್ಲಿನ ವೈದ್ಯರುಗಳ ನಿರ್ಲಕ್ಷ್ಯ, ಆರೋಗ್ಯ ರಕ್ಷಾ ಕವಚ ಸಮಿತಿ ಹೆಸರಿನಲ್ಲಿ ಖಾಸಗೀಕರಣದ ವಿರುದ್ಧ ಅಖಿಲ ಭಾರತ ಕಾರ್ಮಿಕ ಸಂಘ ಶೀರ್ತಾಡಿ, ಮಂಗಳೂರು ಇದರ ವತಿಯಿಂದ ಇಂದು ಬೆಳಿಗ್ಗೆ 10.00ರಿಂದ  ನಗರದ ವೆನ್ಲಾಕ್ ಆಸ್ಪತ್ರೆಯ ಮುಂಭಾಗದಲ್ಲಿ ಅಹೋ ರಾತ್ರಿ ಪ್ರತಿಭಟನೆ ಆರಂಭಗೊಂಡಿದೆ. ಪ್ರತಿಭಟನೆಯ ನೇತೃತ್ವ ವಹಿಸಿದ ಅಖಿಲ ಭಾರತ ಕಾರ್ಮಿಕ ಸಂಘ  ಪ್ರಧಾನ ಕಾರ್ಯದರ್ಶಿ ಸುದತ್ತ ಜೈನ್ ಶೀರ್ತಾಡಿ ಅವರು ಮಾತನಾಡಿ, […]

ಈಜಿಪ್ಟನ ಜನತೆಗೆ ಪಿ.ಎಫ್.ಐ ಅಭಿನಂದನೆ

Tuesday, February 15th, 2011
ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾ

ಮಂಗಳೂರು: ಈಜಿಪ್ಟಿನ ಅಧ್ಯಕ್ಷ ಹೋಸ್ನಿ ಮುಬಾರಕ್ ಅಧಿಕಾರಕ್ಕೆ ಅಂತ್ಯ ಕಾಣಿಸಿದ ಈಜಿಪ್ಟಿನ ಜನತೆಗೆ ಅಭಿನಂದನೆ ಸೂಚಿಸುವ ಸಭೆಯನ್ನು ಪಾಪ್ಯಲರ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ಶಾಖೆ ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸಿತು. ಅಭಿನಂದನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿ.ಎಫ್.ಐ ಸದಸ್ಯ ನಝೀರ್ ಬೋಳಂಗಡಿ ಮಾತನಾಡಿ ಮೂವತ್ತು ವರ್ಷಗಳಿಂದ ಈಜಿಪ್ಟಿನ ಜನತೆಯ ಮೇಲೆ ಸರ್ವಾಧಿಕಾರರವನ್ನು ನಡೆಸುತ್ತಿದ್ದ ಹೋಸ್ನಿ ಮುಬಾರಕ್ ಅಧಿಕಾರವನ್ನು ಪ್ರತಿಭಟನೆಯ ಮೂಲಕ ಕೊನೆಗಾಣಿಸಿ ಜಯ ಪಡೆದ ಅಲ್ಲಿನ ಜನತೆಯನ್ನು ನಾವು ಅಭಿನಂದಿಸುತ್ತೇವೆ. ಈಜಿಪ್ಟಿನ ಸರ್ವಾಧಿಕಾರಿಗೆ ಆದ […]

ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಪೂಜಾರ್ತಿ

Friday, February 11th, 2011
ಮಂಗಳೂರು ತಾಲೂಕು ಪಂಚಾಯತ್

ಮಂಗಳೂರು : ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾಗಿ ಶ್ರೀಮತಿ ಭವ್ಯ ಪೂಜಾರ್ತಿ ಯವರು ಆಯ್ಕೆಯಾಗಿರುತ್ತಾರೆ. ಇವರು ಕಲ್ಲಮುಂಡ್ಕೂರು ತಾಲೂಕು ಪಂಚಾಯತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದು, ಪದವೀಧರರಾಗಿದ್ದಾರೆ. ತಾಲೂಕುಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ, ಭವ್ಯಾ ಪೂಜಾರ್ತಿಯವರು 19 ಮತಗಳನ್ನು ಪಡೆದು, ಕಾಂಗ್ರೆಸ್ನ ಸುರೇಖಾ ಚಂದ್ರಹಾಸ್ ರವರನ್ನು 1 ಮತದ ಅಂತರದಿಂದ ಸೋಲಿಸಿದರು. ಸುರೇಖಾ ಚಂದ್ರಹಾಸ್ರವರು 18 ಮತಗಳನ್ನು ಪಡೆದಿದ್ದರು. ಹಾಗೆಯೇ ಮಂಗಳೂರು ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರು […]

ದ.ಕ.ಜಿಲ್ಲೆಯಲ್ಲಿ 1.96ಲಕ್ಷ ಎಕರೆ ಸರಕಾರಿ ಭೂಮಿ ಒತ್ತುವರಿ-ಸುಬೋಧ್ ಯಾದವ್

Wednesday, February 9th, 2011
ಸುಬೋಧ್ ಯಾದವ್

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ 5,63,000 ಎಕರೆ ಸರಕಾರಿ ಭೂಮಿ ಇದ್ದು,ಇದರಲ್ಲಿ 1,96,000 ಎಕರೆಗೆ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ತಿಳಿಸಿದ್ದಾರೆ. ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸುವ ಕುರಿತಾದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬೆಳ್ತಂಗಡಿ ತಾಲೂಕಿನಲ್ಲಿ 2 ಲಕ್ಷ ಎಕರೆ ಸರಕಾರಿ ಜಮೀನು ಇದ್ದು,ಇದರಲ್ಲಿ 50,000 ಎಕರೆ ಜಮೀನು ಒತ್ತುವರಿಯಾಗಿದೆ. ಇದೇ ರೀತಿ ಸುಳ್ಯ ತಾಲ್ಲೂಕಿನಲ್ಲಿರುವ 1.20 ಲಕ್ಷ […]

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಕೆ.ಟಿ ಶೈಲಾಜಾ ಭಟ್

Wednesday, February 9th, 2011
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಚುನಾವಣೆ

ಮಂಗಳೂರು,ಫೆ.08: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ 2011-12ರ ಅವಧಿಯ ಅಧ್ಯಕ್ಷರಾಗಿ ಬಿಜೆಪಿ ಸದಸ್ಯರಾದ ಕೆ.ಟಿ ಶೈಲಾಜಾ ಭಟ್  ಅವರು ಅಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಧರ್ಮಸ್ಥಳ ಕ್ಷೇತ್ರದ ಬಿಜೆಪಿ ಸದಸ್ಯೆ ಧನಲಕ್ಷ್ಮೀ ಜನಾರ್ಧನ್.ಡಿ ಇವರು ಅಯ್ಕೆಯಾಗಿದ್ದಾರೆ . ಚುನಾವಣಾಧಿಕಾರಿ   ಎಂ.ವಿ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಹಾಯಕ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ  ಅವರ ಉಪಸ್ಥಿತಿಯಲ್ಲಿ ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ  ಅಧ್ಯಕ್ಷ ಹಾಗೂ ಉಪಾಧ್ಯಕ್ಷ  ಚುನಾವಣೆ ನಡೆಯಿತು. ಒಟ್ಟು 35 ಸದಸ್ಯ ಬಲದ ದ.ಕ.ಜಿಲ್ಲಾ ಪಂಚಾಯತ್‌ನಲ್ಲಿ ಬಿಜೆಪಿ […]

ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಅಮಾನತಿಗಾಗಿ ಶ್ರೀ ರಾಮ ಸೇನೆ ಪ್ರತಿಭಟನೆ

Tuesday, February 8th, 2011
ಶ್ರೀ ರಾಮ ಸೇನೆ ಪ್ರತಿಭಟನೆ

ಮಂಗಳೂರು: ಶ್ರೀ ರಾಮ ಸೇನೆ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮಂಗಳೂರು ಇದರ ಮುಂಭಾಗದಲ್ಲಿ ಶಬರಿಮಲೆ ದೇವಸ್ವಂ ಮಂಡಳಿ ಮತ್ತು ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಹೇಳಿಕೆಯನ್ನು ವಿರೋಧಿಸಿ ಸೋಮವಾರ ಬೆಳಿಗ್ಗೆ ಪ್ರತಿಭಟನೆಯನ್ನು ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ಕುಮಾರ್ ಮಾಲೆಮಾರ್, ಶಬರಿಮಲೆ ಮಕರ ಜ್ಯೋತಿ ಮಾನವ ನಿರ್ಮಿತ ಎಂದು ದೇವಸ್ವಂ ಮಂಡಳಿ ಮತ್ತು ಟಿ.ಡಿ.ಪಿ.ಯ ಅಧ್ಯಕ್ಷ ಎಮ್.ರಾಜಗೊಪಾಲನ್ ನಾಯರ್ ಸ್ಪಷ್ಟನೆ ನೀಡಿರುವುದನ್ನು ಶ್ರೀ ರಾಮಸೇನೆ […]

ಬಂಟ್ವಾಳದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಟ್ಟಡ ಉದ್ಘಾಟನೆ

Saturday, February 5th, 2011
ಬಂಟ್ವಾಳದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಕಟ್ಟಡ ಉದ್ಘಾಟನೆ

ಮಂಗಳೂರು : ದೇಶದಲ್ಲಿ ಸರ್ವೋಚ್ಚ್ಚ ನ್ಯಾಯಾಲಯದಲ್ಲಿ ಪ್ರತಿ ವರ್ಷ 50,000 ಕಟ್ಲೆಗಳು ವಿಲೇವಾರಿಯಾಗುತ್ತಿದೆ.ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ 16 ಲಕ್ಷ ಮೊಕದ್ದಮೆಗಳು ತೀರ್ಮಾನವಾಗುತ್ತವೆ. ಕೆಳಮಟ್ಟದ  ಕೋರ್ಟ್ ಗಳಲ್ಲಿ  1.6 ಕೋಟಿ ದಾವೆಗಳು ಇತ್ಯರ್ಥವಾಗುತ್ತಿದ್ದರೂ, ನಮ್ಮ ನ್ಯಾಯಾಲಯಗಳಲ್ಲಿ ಇನ್ನು 3 ಕೋಟಿ ಮೊಕದ್ದಮೆಗಳು ಬಾಕಿ ಉಳಿದಿವೆ.ಆದ್ದರಿಂದ ನ್ಯಾಯಾಂಗದಲ್ಲಿರುವ ಎಲ್ಲರೂ ಕಕ್ಷಿದಾರರಿಗೆ ತ್ವರಿತ ಹಾಗೂ ಗುಣಮಟ್ಟದ ನ್ಯಾಯದಾನ ವಿತರಿಸಲು ಮುಂದಾಗಬೇಕೆಂದರು. ಕರ್ನಾಟಕ  ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಶ್ರೀ ಎಚ್.ಎನ್.ನಾಗಮೋಹನದಾಸ್ ಅವರು ನ್ಯಾಯಾಂಗ ಇಲಾಖೆ ಹಾಗೂ […]

ಫೆ.20ರಂದು ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟ (21 ಮತ್ತು 6 ಕಿ.ಮೀ)

Saturday, February 5th, 2011
ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ವಿಜಯಾ ಬ್ಯಾಂಕಿನವರ ಸಂಯೋಜನೆ ಪ್ರಾಯೋಜಕತೆಯಲ್ಲಿ ಮುಂದಿನ ಫೆ.20ರಂದು ಬೆಳೆಗ್ಗೆ 6ಗಂಟೆಗೆ ನೆಹರೂ ಮೈದಾನದಿಂದ ಹೊರಟು ನಗರ ಉತ್ತರ ಭಾಗದ ಮಂಗಳಾ ಕ್ರೀಡಾಂಗಣದ ತನಕ ‘ಹಾಫ್ ಮ್ಯಾರಥಾನ್ ಓಟ-2011’ ಜರಗಲಿದೆಯೆಂದು ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಇಂದು ಬೆಳಿಗ್ಗೆ ತಮ್ಮ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ವಾರ್ತಾಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ಬಂದರು ಹಾಗೂ ಉಸ್ತುವಾರಿ ಮಂತ್ರಿ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರದ ಸಂಸದರಾದ ನಳಿನ್ ಕುಮಾರ ಹಾಗೂ ಪೊಲೀಸು […]

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯ ಮಂತ್ರಿಗಳಿಂದ ಚಾಲನೆ

Saturday, February 5th, 2011
77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು : 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಡಪ್ರಭು ಕೆಂಪೇಗೌಡ ಮಹಾಮಂಟಪದಲ್ಲಿ ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದರು. ಶುಕ್ರವಾರದಿಂದ ಮೂರು ದಿನಗಳ ಕಾಲ ಉದ್ಯಾನಗರಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ  ನಡೆಯಲಿದೆ. ನಾಡಗೀತೆಯೊಂದಿಗೆ ಆರಂಭವಾದ ಸಾಹಿತ್ಯ ಜಾತ್ರೆಗೆ ಚಾಲನೆ ನೀಡಿದ ಬಳಿಕ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ನಾಲ್ಕು ದಶಕಗಳ ನಂತರ ಈ ನಾಡ ಹಬ್ಬವನ್ನು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿರುವುದು ನಿಜಕ್ಕೂ ಸಂತಸದ […]

ಫೆಬ್ರುವರಿ 24ರಂದು ರಾಜ್ಯದ ಮುಂಗಡ ಪತ್ರ ಮಂಡನೆ

Thursday, February 3rd, 2011
VS Acharya

ಬೆಂಗಳೂರು : ಇಂದು ನಡೆದ  ಸಚಿವ ಸಂಪುಟದ ಸಭೆಯಲ್ಲಿ ಪ್ರಸಕ್ತ ಸಾಲಿನ ಮುಂಗಡ ಪತ್ರ ಮಂಡನೆಯ ಬಗ್ಗೆ ಚರ್ಚೆ ನಡೆದಿದ್ದು, ಅದರಂತೆ ಫೆಬ್ರುವರಿ 24ರ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಲಿದ್ದಾರೆ ಎಂದು ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ,  15 ದಿನಗಳ ಕಾಲ ಬಜೆಟ್ ಅಧಿವೇಶನ ನಡೆಯಲಿದೆ.  ಲೋಕಾಯುಕ್ತ ಸಿಬ್ಬಂದಿ ವೇತನ ಶೇ.10ರಷ್ಟು ಏರಿಕೆ, ರಾಜ್ಯದಲ್ಲಿರುವ ಸುಮಾರು 1.5 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ನಿರ್ಧರಿಸಲಾಗಿದೆ ಎಂದರು. ಗಡಿನಾಡ ಅಭಿವೃದ್ಧಿಗೆ […]