ಜನಗಣತಿ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ: ಅಪರ ಜಿಲ್ಲಾಧಿಕಾರಿ

Wednesday, February 2nd, 2011
ಪ್ರಭಾಕರ ಶರ್ಮಾ

ಮಂಗಳೂರು : ಫೆಬ್ರವರಿ 9 ರಿಂದ ಫೆಬ್ರವರಿ 28 ರವರೆಗೆ ಭಾರತ ಜನಗಣತಿ-2011 ನಡೆಯಲಿದ್ದು, ಎಲ್ಲ ಇಲಾಖೆಗಳ ಸಹಕಾರವನ್ನು ಜನಗಣತಿ ನಿರ್ದೇಶಾನಲಯ ಕೋರಿದೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಹೇಳಿದರು. ಅವರಿಂದು ಜನಗಣತಿ ನಿರ್ದೇಶಾನಲಯದ ಸೂಚನೆಯಂತೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದರು. ಜನಗಣತಿಯ ಉದ್ದೇಶ ಕೇವಲ ಜನಸಂಖ್ಯಾ ಮಾಹಿತಿಯನ್ನು ಸಂಗ್ರಹಿಸುವವುದಷ್ಟೇ ಅಲ್ಲ; ಜನಗಣತಿ ಸಂಖ್ಯಾಶಾಸ್ತ್ರ, ಆರ್ಥಿಕ ಚಟುವಟಿಕೆ, ಸಾಕ್ಷರತೆ ಮತ್ತು ಶಿಕ್ಷಣ ಮತ್ತು ಕುಟುಂಬಗಳಿಗೆ ಲಭ್ಯವಿರುವ ಸೌಲಭ್ಯಗಳು, ನಗರೀಕರಣ, […]

ಉಳ್ಳಾಲದ ರಾಣಿ ಅಬ್ಬಕ ಉತ್ಸವಕ್ಕೆ ಅದ್ದೂರಿ ಚಾಲನೆ

Saturday, January 29th, 2011
ವೀರ ರಾಣಿ ಅಬ್ಬಕ ಉತ್ಸವ

ಕೋಣಾಜೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ವೀರ ರಾಣಿ ಅಬ್ಬಕ ಉತ್ಸವ ಸಮಿತಿ ವತಿಯಿಂದ ಮಂಗಳೂರು ಹೊರವಲಯ ಅಸೈಗೋಳಿಯ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ಮೇಯರ್ ರಜನಿ ದುಗ್ಗಣ್ಣ ದೀಪ ಬೆಳಗಿಸುವುದರ ಮೂಲಕ ವೀರ ರಾಣಿ ಅಬ್ಬಕ್ಕ ಉತ್ಸವ 2011ಕ್ಕೆ ಚಾಲನೆ ನೀಡಿದರು. ಜನಪದ ದಿಬ್ಬಣದ ವಿಶೇಷ ಆಕರ್ಷಣೆಗಳಾದ ಪೂರ್ಣಕೊಂಭ, ಮಂಗಳವಾದ್ಯ, ಕೀಲುಕುದುರೆ, ಯಕ್ಷಗಾನ ಗೊಂಬೆ, ಕರಗನೃತ್ಯ, ಬ್ಯಾರಿ ಸಂಪ್ರದಾಯದ ದಫ್, ತಾಲೀಮು ಆಟ, ಕಳಂಜಿ, ಕಂಗೀಲು, ಬಣ್ಣದ ಕೊಡೆಗಳು, ಬ್ಯಾಂಡ್, ಚೆಂಡೆ ವಾದನ, ದೋಣಿಯೇರಿದ […]

ವಿದ್ಯಾರ್ಥಿಶಕ್ತಿ ಎದ್ದು ನಿಂತರೆ ಮಾತ್ರ ದೇಶ ಕಾಪಾಡಲು ಸಾಧ್ಯ – ಪಿ.ಪಿ. ಹೆಗಡೆ

Friday, January 28th, 2011
ವಿವೇಕೋತ್ಸವ 2011

ಮಂಗಳೂರು : ಆಗಸ್ಟ್ 15ನ್ನು ದೇಶದೆಲ್ಲೆಡೆ ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತಾರೆ. ಆದರೆ ಅದು ಕರಾಳದಿನ. ಭಾರತ, ಬಾಂಗ್ಲಾ ಮತ್ತು ಪಾಕಿಸ್ಥಾನದಿಂದ ಬೇರ್ಪಡೆಯಾದ ದಿನ. ಬಾರತಾಂಬೆಯನ್ನು ತುಂಡರಿಸಿದ ದಿನ. ಈ ದಿನವನ್ನು ಕರಾಳದಿನವನ್ನಾಗಿ ಆಚರಿಸುವ ಬದಲು ಡಿಸೆಂಬರ್ 6ರಂದು ಕರಾಳದಿನವನ್ನಾಗಿ ಆಚರಿಸುತ್ತಾರೆ. ಬ್ರಿಟೀಷ್ ಬುದ್ಧಿಯ ಜನ ದೇಶವನ್ನು ಆಳುವುದನ್ನು ನಿಲ್ಲಿಸುವ ತನಕ, ಭಾರತಕ್ಕೆ ಪೂರ್ಣರೀತಿಯ ಸ್ವಾತಂತ್ರ್ಯ ದೊರಕುವುದಿಲ್ಲ. ಈಗ ಇರುವ ಎಲ್ಲಾ ವ್ಯವಸ್ಥೆಯ ಮುಂದುವರಿದ ಪಳೆಯುಳಿಕೆಯಾಗಿದೆ ಎಂದು ಮುಖ್ಯ ಭಾಷಣಕಾರರಾಗಿ ರಾಜ್ಯ ವಕೀಲ ಪರಿಷತ್ತಿನ ಅಧ್ಯಕ್ಷ ಪದ್ಮಪ್ರಸಾದ್ ಹೆಗಡೆ […]

ಕಾಂಗ್ರೆಸ್ ವತಿಯಿಂದ ಫೆ.3ರಂದು ಬೃಹತ್ ಯುವ ಜಾಗೃತಿ ಸಮಾವೇಶ

Friday, January 28th, 2011
ಬೃಹತ್ ಯುವ ಜಾಗೃತಿ ಸಮಾವೇಶ

ಮಂಗಳೂರು; ದೇಶಾದ್ಯಂತ ಯುವ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳನ್ನು ಪ್ರಜಾತಂತ್ರ ವ್ಯವಸ್ಥೆಯ ಮೂಲಕ ಆರಿಸಿ ಪಕ್ಷವನ್ನು ಬಲಿಷ್ಠಗೊಳಿಸುವ ಹಾಗೂ ಪಾರದರ್ಶಕ ವ್ಯವಸ್ಥೆ ಸ್ಥಾಪಿಸುವ ಉದ್ದೇಶದಿಂದ ಯುವ ಕಾಂಗ್ರೆಸ್ ಸಮಿತಿಗೆ ಚುನಾವಣೆಯನ್ನು ಶ್ರೀಯುತ ರಾಹುಲ್ ಗಾಂಧಿಯವರು ಚಾಲನೆ ನೀಡಿದ್ದು ಈ ಪ್ರಕ್ರಿಯೆಯನ್ನು ಈಗಾಗಲೇ ಸುಮಾರು 16 ರಾಜ್ಯಗಳಲ್ಲಿ ಪೂರ್ಣಗೊಳಿಸಲಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಯುವ ಕಾಂಗ್ರೆಸ್ ಸಮಿತಿಗೆ   ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾದ ಪ್ರಯುಕ್ತ ಮೊದಲನೆಯದಾಗಿ ಯುವ ಜನರನ್ನು ಯುವ ಕಾಂಗ್ರೆಸ್ಗೆ ಸದಸ್ಯರನ್ನಾಗಿ ನೋಂದಾಯಿಸುವ ಪ್ರಕ್ರಿಯೆ ಕರ್ನಾಟಕ ರಾಜ್ಯದ ದ.ಕ. ಜಿಲ್ಲೆಯ […]

ಮಂಗಳೂರಿಗೆ ಎರಡು ನೂತನ ಉಪ ವಿದ್ಯತ್ ಕೇಂದ್ರಗಳ ಸಮರ್ಪಣೆ

Thursday, January 27th, 2011
ನೂತನ ಉಪ ವಿದ್ಯತ್ ಕೇಂದ್ರಗಳ ಉದ್ಘಾಟನೆ

ಮಂಗಳೂರು: ಮಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ನಗರದ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ 33/11 ಕೆ.ವಿ ವಿತರಣಾ ಕೇಂದ್ರಗಳ ಚಾಲನೆಗೊಲಿಸುವ ಮೂಲಕ ಶೋಭಾಕರಂದ್ಲಾಜೆ ಉದ್ಘಾಟನೆ ನಡೆಸಿದರು. ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ ನೂತನವಾಗಿ 33/11 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲಾಗಿದ್ದು. ಮಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಗಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಸ್ಥಾಪಿತವಾಗಿರುವ ಈ ನೂತನ ವಿದ್ಯುತ್ ಉಪಕೇಂದ್ರಗಳಾದ ಕುದ್ರೋಳಿಯಲ್ಲಿ 5 ಎಮ್. ವಿ. ಎ ಸಾಮಥ್ರ್ಯದ ಎರಡು […]

ನೆಹರು ಮೈದಾನದಲ್ಲಿ ಆಕರ್ಷಕ ಕವಾಯತಿನೊಂದಿಗೆ 62 ನೇ ಗಣರಾಜ್ಯೋತ್ಸವ ಆಚರಣೆ

Wednesday, January 26th, 2011
62 ನೇ ಗಣರಾಜ್ಯೋತ್ಸವ

ಮಂಗಳೂರು:   62 ನೇ ಗಣರಾಜ್ಯೋತ್ಸವದ ಅಂಗವಾಗಿ ಸನ್ಮಾನ್ಯ ದ.ಕ ಜಿಲ್ಲಾ ಉಸ್ತುವಾರಿ ಸಚಿವ  ಶ್ರೀ ಕೃಷ್ಣ ಜೆ. ಪಾಲೆಮಾರ್ ರವರು ಇಂದು ಬೆಳಿಗ್ಗೆ ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದಕ್ಷಿಣ ಕನ್ನಡದಲ್ಲಿ ನಡೆದ ಹಾಗೂ ನಡೆಯಲಿರುವ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಮಗ್ರ ವರದಿಯನ್ನು ತನ್ನ ಗಣರಾಜೋತ್ಸವದ ಭಾಷಣದಲ್ಲಿ ವಿವರಿಸಿದರು. ದೈರ್ಯ ಸಾಹಸಕ್ಕಾಗಿ ನೀಡುವ ರಾಜ್ಯಮಟ್ಟದ ಹೊಯ್ಸಳ ಪ್ರಶಸ್ತಿಯನ್ನು ಪ್ರವೀಣ ಎ.ಕೆ. ಸುಳ್ಯ ಹಾಗೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ   […]

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ

Tuesday, January 25th, 2011
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ

ಮಂಗಳೂರು :  ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರಿಗೆ ಇಲಾಖೆ, ಮಂಗಳೂರು ನಗರ ಪೊಲೀಸ್ ಮತ್ತು ದ.ಕ. ಜಿಲ್ಲಾ ಪೊಲೀಸ್ ಆಶ್ರಯದಲ್ಲಿ ಆಯೋಜಿಸಿದ 22ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಇಂದು ಮಂಗಳೂರಿನಲ್ಲಿ ಚಾಲನೆ ನೀಡಲಾಯಿತು.  ಕಾರ್ಯಕ್ರಮವನ್ನು ಮಾಹೆ ವಿಶ್ವ ವಿದ್ಯಾ ನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎಂ.ಹೆಗ್ಡೆ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಕುಲಪತಿಗಳಾದ ಡಾ.ಬಿ.ಎಂ.ಹೆಗ್ಡೆ  ಸಂಚಾರಿ ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಅಫಘಾತಗಳನ್ನು ಕಡಿಮೆ ಮಾಡಬಹುದು, ವಿದ್ಯಾರ್ಥಿಗಳಿಗೆ  ಈ  ಬಗ್ಗೆ  ಶಾಲೆಯಲ್ಲಿ ಶಿಕ್ಷಣ ನೀಡುವುದರಿಂದಲೂ ಅಫಘಾತಗಳ ಬಗ್ಗೆ ಹೆಚ್ಚಿನ ಅರಿವು […]

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ರಂಭಾ

Thursday, January 20th, 2011
ರಂಭಾ

ಬೆಂಗಳೂರು :  ‘ಸರ್ವರ್ ಸೋಮಣ್ಣ’ ಕನ್ನಡ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ  ದಕ್ಷಿಣ ಭಾರತದ ನಟಿ ರಂಭಾ ಸಂಕ್ರಾಂತಿ ಹಬ್ಬ, ಜನವರಿ 14ರಂದು ಕೆನಡಾದ ಟೊರೊಂಟೊದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೆನಡಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿ ಇಂದಿರನ್ ಪದ್ಮನಾಭನ್ ಅವರನ್ನು ರಂಭಾ ಕಳೆದ ವರ್ಷದ ಏಪ್ರಿಲ್ 8ರಂದು ತಿರುಪತಿಯಲ್ಲಿ ವರಿಸಿದ್ದರು ನಂತರ ನ್ಯೂಜಿಲಂಡ್ ಗೆ ಮಧುಚಂದ್ರಕ್ಕೆಂದು ಹೋಗಿದ್ದರು. ಹೆರಿಗೆ ಆಗುವಾಗ ರಂಭಾ ಕುಟುಂಬದ ಸದಸ್ಯರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ. ನವರಸ ನಾಯಕ ಜಗ್ಗೇಶ್ ಜೊತೆಯಲ್ಲಿ […]

ಬೀಚ್ ಉತ್ಸವ ಜನವರಿ 21, 22

Monday, January 17th, 2011
ಬೀಚ್ ಉತ್ಸವ

ಮಂಗಳೂರು: ಕರಾವಳಿ ಉತ್ಸವ 2010-11ರ ಅಂಗವಾಗಿ ಇದೇ ತಿಂಗಳ 21, 22 ಮತ್ತು 23 ಈ ಮೂರು ದಿನಗಳಂದು ಪಣಂಬೂರು ಬೀಚ್ನಲ್ಲಿ ಬೀಚೋತ್ಸವವು ಜರಗಲಿರುವುದು ಎಂದು ಸಹಾಯಕ ಆಯುಕ್ತ  ಪ್ರಭುಲಿಂಗ ಕಾವಳಿಕಟ್ಟಿ ತಿಳಿಸಿದರು. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬೀಚ್ ಉತ್ಸವದ ಕಾರ್ಯಕ್ರಮಗಳ ವಿವರಗಳನ್ನು ಅವರು ತಿಳಿಸಿದರು. 21ರಂದು ಸಂಜೆ 4 ಗಂಟೆಗೆ ಬೀಚ್ ಉತ್ಸವವನ್ನು ಮಾನ್ಯ ಮೇಯರ್ ರವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಬೀಚ್ ವಾಲಿಬಲ್ ಹಾಗೂ ತ್ರೋಬಾಲ್ ಪಂದ್ಯಾಟಗಳು […]

ಸಾಮಾಜಿಕ ಶಾಂತಿಗೆ ಪೊಲೀಸರ ಕೊಡುಗೆ ಗಮನೀಯ:ಸುಬೋಧ್ ಯಾದವ್

Tuesday, January 11th, 2011
ಪೋಲಿಸ್ ವಾರ್ಷಿಕ ಕ್ರೀಡಾಕೂಟ

ಮಂಗಳೂರು ಜ 11: ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಅರಕ್ಷಕರ ಸಮಯ ಪ್ರಜ್ಞೆ ಮುಂಜಾಗ್ರತೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಾಮಾಜಿಕ ಶಾಂತಿ ಮತ್ತು ಸೌಖ್ಯ ನೆಲೆಸಿದೆ ಎಂದು ದಕ್ಷಿಣಕನ್ನಡ ಪೊಲೀಸರ ಕಾರ್ಯ ವೈಖರಿಯನ್ನು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಪ್ರಶಂಸಿಸಿದರು. ಅವರು ಇಂದು ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ನಿರಂತರವಾಗಿವಿವಿಧ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಶಾಂತಿ, ಸುವ್ಯವಸ್ಥೆಯಪಾಲನೆಯಲ್ಲಿ ಲೋಪಗಳಿಲ್ಲ. ಪೊಲೀಸರ ಬಿಡುವಿಲ್ಲದ ಕೆಲಸದ ನಡುವೆ ವಾರ್ಷಿಕ […]