ನೇತ್ರಾವತಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

6:04 PM, Thursday, April 4th, 2013
Share
1 Star2 Stars3 Stars4 Stars5 Stars
(No Ratings Yet)
Loading...

Netravati riverಮಂಗಳೂರು : ನೇತ್ರಾವತಿ ನದಿಯಲ್ಲಿ ಕಪ್ಪೆಚಿಪ್ಪು ಹೆಕ್ಕಲು ಹೋದ ವ್ಯಕ್ತಿಯೊಬ್ಬರು  ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಜೆಪ್ಪು ಮಹಾಕಾಳಿ ಪಡ್ಪು ರೈಲ್ವೆ ಬ್ರಿಡ್ಜ್ ಬಳಿ ನಡೆದಿದೆ.  ಜೆಪ್ಪು ನಿವಾಸಿ ಪೌಲ್ ಲೋಬೊ ಮೃತಪಟ್ಟವರಾಗಿದ್ದಾರೆ.

55 ವರ್ಷದವರಾದ ಪೌಲ್  ಬೋಟ್ ರಿಪೇರಿಯ ಕೆಲಸ ಮಾಡುತ್ತಿದ್ದು ಸ್ವಲ್ಪ ಸಮಯದಿಂದ ಮನೆಯಲ್ಲೇ ಉಳಿದುಕೊಂಡಿದ್ದರು. ಮೂಲಗಳ ಪ್ರಕಾರ ಗುರುವಾರ ಬೆಳಗ್ಗೆ  ಒಟ್ಟು ನಾಲ್ಕು ಜನ ನೇತ್ರಾವತಿ ನದಿಯಲ್ಲಿ  ಕಪ್ಪೆ ಚಿಪ್ಪು ಹೆಕ್ಕಲು ಹೋಗಿ ಬಳಿಕ ಇವರಲ್ಲಿ ಮೂವರು ಒಂದು ದಿಕ್ಕಿನಲ್ಲಿ ಮರಳಿದ್ದು ಪೌಲ್ ಲೋಬೊ ಮತ್ತೊಂದು ದಿಕ್ಕಿನಲ್ಲಿ ಮರಳುವ  ವೇಳೆ ಕೆಸರಿನಲ್ಲಿ ಸಿಲುಕಿ ಮರಳಿ ಬರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ. ಪೌಲ್  ಒಬ್ಬ ಉತ್ತಮ ಈಜುಗಾರರು ಆಗಿದ್ದರು.

ಈ ವೇಳೆ ದಡಕ್ಕೆ ಮರಳಿದ ಇತರರು ಪೌಲ್ ಹಿಂದಿರುಗಿ ಬಾರದೇ ಇದ್ದುದನ್ನು ಕಂಡು ಕೂಡಲೇ ಅಗ್ನಿ ಶಾಮಕ ದಳದವರಿಗೆ ವಿಷಯ ಮುಟ್ಟಿಸಿದ್ದಾರೆ. ಮಧ್ಯಾಹ್ನ ಸುಮಾರು ಒಂದು ಗಂಟೆ ವೇಳೆಗೆ ಅಗ್ನಿಶಾಮಕ ದಳದವರ ಸ್ಥಳಕ್ಕಾಗಮಿಸಿ ಶವದ ಹುಡುಕಾಟದಲ್ಲಿ ತೊಡಗಿದ್ದಾರೆ. ಮೂರು ಗಂಟೆ ವೇಳೆ ಶವ ಪತ್ತೆಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English