ಮಂಗಳೂರು : ಕರಾವಳಿಯ ಯುವ ನಿರ್ದೇಶಕ ಸಾಯಿ ಕೃಷ್ಣ ಕುಡ್ಲ ನಿರ್ದೆಶನದಲ್ಲಿ ಮೂಡಿ ಬಂದಿರುವ, ಕರಾವಳಿಯ ಬಹಿತೇಕ ಕಲಾವಿದರನ್ನು ಒಳಗೊಂಡ ಕನ್ನಡ ಚಲನಚಿತ್ರ ಚೆಲ್ಲಾಪಿಲ್ಲಿಯ ದ್ವನಿಸುರುಳಿ ಬಿಡುಗಡೆ ಸಮಾರಂಭ ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಶುಕ್ರವಾರ ನಡೆಯಿತು.
ಚಿತ್ರದ ದ್ವನಿ ಸುರುಳಿಯನ್ನು ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಎನ್. ರಾಜೇಂದ್ರಕುಮಾರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಇದೀಗ ಕರಾವಳಿಯಲ್ಲೂ ಕನ್ನಡ ಚಿತ್ರಗಳನ್ನು ನಿರ್ಮಿಸಬಲ್ಲ, ನಿರ್ದೇಶಿಸಬಲ್ಲ ಪ್ರತಿಭೆಗಳಿವೆ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದ್ದು, ಕರಾವಳಿಯ ಬಹುತೇಕ ಕಲಾವಿದರು ಸ್ಯಾಂಡಲ್ವುಡ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಚಿತ್ರದ ನಿಜವಾದ ಹಿರಿಮೆಯಾಗಿದ್ದು, ಶೀಘ್ರದಲ್ಲೇ ತೆರೆ ಕಾಣಲಿರುವ ಚಿತ್ರ ಶತ ದಿನಗಳನ್ನು ಪೂರೈಸಲಿ’ ಎಂದು ಶುಭ ಹಾರೈಸಿದರು.
ಸಮಾರಂಭದ ಅತಿಥಿಯಾಗಿದ್ದ ತುಳು ನಾಟಕ, ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಕರಾವಳಿಯ ಪ್ರತಿಭೆ ಸಾಯಿಕೃಷ್ಣ ಅವರ ಮೂಲಕ ಸ್ಯಾಂಡಲ್ವುಡ್ನಲ್ಲಿ ಚೆಲ್ಲಾಪಿಲ್ಲಿ ಚಿತ್ರ ಮೂಡಿಬರುತ್ತಿರುವುದು ಕರಾವಳಿಯ ಕಲಾವಿದರಿಗೆ ದೊರಕಿರುವ ಮಾನ್ಯತೆ. ಚಿತ್ರವು ಯಶಸ್ಸನ್ನು ಕಂಡು, ಇದೇ ತಂಡದಿಂದ ಇನ್ನಷ್ಟು ಚಿತ್ರ ನಿರ್ಮಾಣಗೊಳ್ಳಲ್ಲಿ ಎಂದು ಅವರು ಶುಭ ಹಾರೈಸಿದರು.
ರಂಗಭೂಮಿ ಕಲಾವಿದ ಹಾಗೂ ಚಿತ್ರನಟ ದೇವದಾಸ್ ಕಾಪಿಕಾಡ್, ಕಲಾವಿದರಾದ ಕುಸಲ್ದರಸೆ ನವೀನ್ ಡಿ. ಪಡೀಲ್, ಅರವಿಂದ ಬೋಳಾರ, ಸಂತೋಷ್ ಶೆಟ್ಟಿ, ಚೆಲ್ಲಾಪಿಲ್ಲಿ ಚಿತ್ರದ ನಿರ್ದೇಶಕ ಸಾಯಿಕೃಷ್ಣ ಕುಡ್ಲ, ಚಿತ್ರ ನಿರ್ಮಾಪಕರಾದ ಸುದೇಶ್ ಭಂಡಾರಿ, ಸುಖೇಶ್ ಭಂಡಾರಿ, ಸುಪ್ರಿತ್ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಕೇರಳದ ಯುವ ಸಂಗೀತ ನಿರ್ದೇಶಕ ಮಿಕ್ಕು ಕಾವಿಲ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೆಶನ ಮಾಡಿದ್ದಾರೆ. ಪ್ರಸಿದ್ಧ ಗಾಯಕರಾದ ಜೆಸ್ಸಿಗಿಫ್ಟ್, ಕಾರ್ತಿಕ್, ಮಾಲತಿ, ಶಮಿತಾ ಮಲಾಡ್, ಅನುರಾಧಾ ಭಟ್, ನಕುಲ್, ಅಭ್ಯಂಕರ್ ಮುಂತಾದ ಗಾಯಕರು ಚಿತ್ರಕ್ಕೆ ಧ್ವನಿ ನೀಡಿದ್ದಾರೆ. ಮಂಜು ಕಾರವಾರ್ ಅವರ ಸಾಹಿತ್ಯವಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬರುವ ಮೇ ತಿಂಗಳಿನಲ್ಲಿ ಚಿತ್ರ ತೆರೆ ಕಾಣಲಿದೆ.
Click this button or press Ctrl+G to toggle between Kannada and English