ಪರೀಕ್ಷೆಯಲ್ಲಿ ಅನಿತ್ತೀರ್ಣಳಾದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

7:03 PM, Tuesday, May 7th, 2013
Share
1 Star2 Stars3 Stars4 Stars5 Stars
(No Ratings Yet)
Loading...

Veena Kundapurಕುಂದಾಪುರ : ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಹಿನ್ನಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿ ತಲ್ಲೂರು ಗರಡಿಮನೆ ಸಮೀಪದ ನಿವಾಸಿ ನರಸಿಂಹ ಪೂಜಾರಿಯವರ ಪುತ್ರಿ ವೀಣಾ.

ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ಈಕೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳೆರಡರಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದಳು ಎನ್ನಲಾಗಿದೆ. ಆದರೆ ಸೋಮವಾರ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ತಾನು ಅನುತ್ತೀರ್ಣಳಾದ ಸಂಗತಿ ತಿಳಿದು ಖಿನ್ನಗೊಂಡ ಆಕೆ ರಾತ್ರಿ ನೆರೆಮನೆಯವರ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇತರೆ ವಿಷಯದಲ್ಲಿ ಉತ್ತಮ ಅಂಕ ಪಡೆದಿರುವ ವೀಣಾ ಇಂಗ್ಲೀಷ್ ವಿಷಯದಲ್ಲಿ ಮಾತ್ರ ಅನುತ್ತೀರ್ಣಳಾಗಿದ್ದಳು. ತಾನು ಅನುತ್ತೀರ್ಣಳಾದ ಬಗ್ಗೆ ತಾಯಿಯಲ್ಲಿ ಹೇಳಿಕೊಂಡಿದ್ದ ಆಕೆ ಈ ವಿಷಯವನ್ನು ತಂದೆಗೆ ತಿಳಿಸಿದಂತೆ ಕೇಳಿಕೊಂಡಿದ್ದಾಳೆ. ರಾತ್ರಿ ೩ ಗಂಟೆಯ ವೇಳೆಗೆ ಮನೆಯಲ್ಲಿ ವೀಣಾ ಇಲ್ಲದನ್ನು ಕಂಡ ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ ಆಲ್ಲದೆ ಆಕೆ ಬರೆದಿಟ್ಟ ಮರಣ ಪತ್ರ ಮನೆಯವರಿಗೆ ಲಭಿಸಿದೆ. ತೀವ್ರ ಹುಡುಕಾಟ ನಡೆಸಿದ ಮನೆಯವರು ಹಾಗು ಸಂಬಧಿಕರಿಗೆ ಬೆಳಗಿನ ಜಾವ ಆಕೆಯ ಮೃತದೇಹ ಪಕ್ಕದ ಮನೆಯ ತೋಟದ ಬಾವಿಯಲ್ಲಿ ಪತ್ತೆಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English