ಮಣಿಪುರದಲ್ಲಿ ಮೋದಿ ಆರ್ಭಟ

4:10 PM, Saturday, February 8th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Narendra-Modiಮಣಿಪುರ: ಈಶಾನ್ಯ ವಿದ್ಯಾರ್ಥಿ ಹತ್ಯೆ ಪ್ರಕರಣ ದೇಶಕ್ಕೆ ನಾಚಿಕೆಗೇಡಾಗಿದೆ.ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ  ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಇಂದು ಮಣಿಪುರ ಸಮಾವೇಶದಲ್ಲಿ ಮಾತನಾಡಿದ ಅವರು ಈಶಾನ್ಯ ವಿದ್ಯಾರ್ಥಿ ಹತ್ಯೆ ಪ್ರಕರಣ ದೇಶಕ್ಕೆ ನಾಚಿಕೆಗೇಡದ ಸಂಗತಿ ಈಶಾನ್ಯ ಜನರಿಗೆ ಯುಪಿಎ ಸರಕಾರ ಸೂಕ್ತ ಭದ್ರತೆ ಒದಗಿಸದೇ ಇರುವುದೇ ಇದಕ್ಕೆ ಕಾರಣ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ ಮೋದಿ ಮಣಿಪುರದಲ್ಲಿ ಕಾಂಗ್ರೆಸ್‌ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇಂತಹವರನ್ನು ಮೊದಲು ಮಟ್ಟಹಾಕಬೇಕು ಎಂದು ಹೇಳಿದ್ದಾರೆ.

ಇಲ್ಲಿನ ಜನತೆಗೆ ಯಾವುದೇ ಭದ್ರತೆ ಇಲ್ಲ .ಜನರಿಗೆ ಭದ್ರತೆ ನೀಡುವಲ್ಲಿ ಯುಪಿಎ ಸರಕಾರ ವಿಫ‌ಲವಾಗಿದೆ. ದೇಶದ ಈಶಾನ್ಯ ಭಾಗದಲ್ಲಿ ಡ್ರಗ್ಸ್‌ ಬಳಕೆ ಹೆಚ್ಚಾಗಿದ್ದು ಇದನ್ನು ತಡೆಯುವಲ್ಲಿ ಯುಪಿಎ ಸರಕಾರ ವಿಫ‌ಲವಾಗಿದೆ ಎಂದು ಮೋದಿ ಅಪಾದಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English