ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ 691ಅಭ್ಯರ್ಥಿಗಗಳ ಗೈರುಹಾಜರಿ

6:00 PM, Friday, April 1st, 2011
Share
1 Star2 Stars3 Stars4 Stars5 Stars
(No Ratings Yet)
Loading...

ಎಸ್ಎಸ್ಎಲ್ಸಿ ಪರೀಕ್ಷೆಮಂಗಳೂರು  : ಇಂದಿನಿಂದ ದಿನಾಂಕ 1-4-11 ಜಿಲ್ಲೆಯ 94 ಪರೀಕ್ಷಾ ಕೇಂದ್ರಗಳಲ್ಲಿ ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆಗೆ 691 ಅಭ್ಯರ್ಥಿಗಳು ಗೈರುಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಚಾಮೇಗೌಡ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 32742 ವಿದ್ಯಾರ್ಥಿಗಳು ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ನೊಂದಾಯಿಸಿಕೊಂಡಿದ್ದರು. ಅತೀ ಹೆಚ್ಚು ಗೈರು ಹಾಜರಾದ 388 ವಿದ್ಯಾರ್ಥಿಗಳು ಮಂಗಳೂರು ನಗರ ಪ್ರದೇಶದಲ್ಲಾದರೆ ಮೂಡಬಿದ್ರೆಯಲ್ಲಿ ಕನಿಷ್ಠ 17 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ. ಉಳಿದಂತೆ ಮಂಗಳೂರು ತಾಲೂಕಿನಲ್ಲಿ 92, ಬಂಟ್ವಾಳದಲ್ಲಿ 71, ಪುತ್ತೂರಿನಲ್ಲಿ 56, ಬೆಳ್ತಂಗಡಿಒಯಲ್ಲಿ 38 ಹಾಗೂ ಸುಳ್ಯದಲ್ಲಿ 29 ವಿದ್ಯಾರ್ಥಿಗಳು ಇಂದಿನ ಪರೀಕ್ಷೆಗೆ ಗೈರುಹಾಜರಾಗಿರುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English