ಮಂಗಳೂರು: ಮೋಹನ್ ಭಟ್ಕಳ್ ನಿರ್ದೇಶನದ ಎಲ್.ವಿ. ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಚಾಪ್ಟರ್’ ತುಳು ಚಲನಚಿತ್ರದ ಮುಹೂರ್ತ ನಗರದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದ ವಠಾರದಲ್ಲಿ ಸೋಮವಾರ ನೆರವೇರಿತು.
ಮನಪಾ ಮುಖ್ಯ ಸಚೇತಕ, ಮಾಜಿ ಮೇಯರ್ ಎಂ. ಶಶಿಧರ ಹೆಗ್ಡೆ ಮುಹೂರ್ತ ನೆರವೇರಿಸಿದರು. ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಎಸ್ಡಿಎಂ ಉದ್ಯಮಾಡಳಿತ ಸ್ನಾತಕೋತ್ತರ ವಿಭಾಗದ ನಿರ್ದೇಶಕ ಡಾ| ದೇವರಾಜ್, ಹಿರಿಯ ರಂಗಕರ್ಮಿ, ನಾಟಕಕಾರ ವಿಜಯ ಕುಮಾರ್ ಕೊಡಿಯಾಲ್ ಬೈಲ್, ನಟರಾದ ಗೋಪಿನಾಥ್ ಭಟ್, ಅರವಿಂದ ಬೋಳಾರ್, ಚಿತ್ರ ನಿರ್ಮಾಪಕ ರಿಚರ್ಡ್ ಕ್ಯಾಸ್ತಲಿನೋ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಭಜರಂಗಿ ಭಾಯಿಜಾನ್ ಚಿತ್ರದ ಸಹ ನಿರ್ಮಾಪಕ ರಾಜೇಶ್ ಭಟ್ ಶುಭ ಹಾರೈಸಿದರು.
ಚಾಪ್ಟರ್ ಚಿತ್ರದ ನಿರ್ಮಾಪಕ ಜಗದೀಶ್, ನಿರ್ದೇಶಕ ಮೋಹನ್ ಭಟ್ಕಳ್, ನಾಯಕ ನಟ ಅಸ್ತಿಕ್ ಶೆಟ್ಟಿ , ನಾಯಕ ನಟಿ ಐಶ್ವರ್ಯ ಹೆಗ್ಡೆ, ಸಂಗೀತ ನಿರ್ದೇಶಕ ಸುರೇಂದ್ರನಾಥ್ ಮೊದಲಾದವರು ಉಪಸ್ಥಿತರಿದ್ದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ನಟ ಅಸ್ತಿಕ್ ಶೆಟ್ಟಿ, ನಾನು ಈಗಾಗಲೇ ಪುನೀತ್ ರಾಜ್ ಕುಮಾರ್ ಅವರ ಪವರ್ ಕನ್ನಡ ಹಾಗೂ ಜೈ ತುಳುನಾಡು ಚಲನಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ. ಇದೊಂದು ವಿಭಿನ್ನ ಚಲನಚಿತ್ರವಾಗಿ ಮೂಡಿಬರಲಿದೆ ಎಂದರು.
ನಿರ್ದೇಶಕ ಮೋಹನ್ ಭಟ್ಕಳ್ ಮಾತನಾಡಿ, ಪವರ್ ಕನ್ನಡ ಸಿನೆಮಾ ಸೇರಿದಂತೆ ಕೆಲವು ಚಿತ್ರಗಳಲ್ಲಿ ಸಹನಿರ್ದೇಶಕನಾಗಿ ಕಾರ್ಯನಿರ್ವಹಿಸಿದ್ದೇನೆ. ಚಾಪ್ಟರ್ ಚಲನಚಿತ್ರ ವಿಭಿನ್ನ ಕಥೆ ಹಾಗೂ ಹಾಸ್ಯಭರಿತವಾಗಿ ಮತ್ತು ಮನೋರಂಚನಾತ್ಮಕವಾಗಿ ಮೂಡಿಬರಲಿದೆ ಎಂದರು.
Click this button or press Ctrl+G to toggle between Kannada and English