ಲೇಖಕ ಮತ್ತು ಪರಿಸರ ಹೋರಾಟಗಾರ ಪತ್ರಕರ್ತ ಜಯಂತ್ ಪಡುಬಿದ್ರಿ ನಿಧನ

11:15 AM, Saturday, October 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

jayanth padubidriಮಂಗಳೂರು:  ಪತ್ರಕರ್ತ ಜಯಂತ್ ಪಡುಬಿದ್ರಿ (58)  ಸಮಕಾಲಿನ ನಿಖರ ಹಾಗೂ ಸೃಜನಶೀಲ ಲೇಖಕ ಮತ್ತು ಪರಿಸರ ಹೋರಾಟಗಾರ ಅಲ್ಪಕಾಲದ ಅಸೌಖ್ಯದಿಂದ ಪಡುಬಿದ್ರಿಯಲ್ಲಿ ನಿಧನ ಹೊಂದಿದರು.

ಇವರು ಮೂಡಬಿದ್ರಿ ಏಂಜಲ್‌ಹಾರ್ಡ್‌ ಯೋಜನೆಯನ್ನು ತಮ್ಮ ಲೇಖನಿಯಿಂದಲೆ ಒದ್ದೋಡಿಸಿ ಖ್ಯಾತರಾಗಿದ್ದರು. ಉದಯವಾಣಿ, ಜನವಾಹಿನಿ, ಲಂಕೇಶ್, ಜಯಕಿರಣ ಸಹಿತ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ, ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದರು. ತಮ್ಮ ತೀಕ್ಷ್ಣ ಬರವಣಿಗೆಯಿಂದ ಅಪಾರ ಓದುಗರನ್ನು ಹೊಂದಿದ್ದರು.

ಅವಿವಾಹಿತರಾಗಿದ್ದ ಅವರು, ಪಡುಬಿದ್ರಿ ಹಾಗೂ ಅವಿಭಜಿತ ದ.ಕ. ಜಿಲ್ಲೆಯ ಹಲವು ಸಮಸ್ಯೆಗಳನ್ನು ತಮ್ಮ ಲೇಖನಿಯಿಂದ ತೆರೆದಿಟ್ಟು ಸಮಸ್ಯೆಗಳ ಪರಿಹಾರಕ್ಕೆ ಗಣನೀಯ ಕೊಡುಗೆ ನೀಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English