ಪ್ರಕಾಶ್ ರೈ ಆಗಮನವನ್ನು ತಾಕತ್ತಿದ್ದರೆ ನಿಲ್ಲಿಸಲಿ: ವಿರೋಧಿಗಳಿಗೆ ಸಚಿವ ಯು.ಟಿ.ಖಾದರ್ ಸವಾಲು

4:47 PM, Friday, December 22nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

U-T-Kaderಮಂಗಳೂರು: ಚಲನಚಿತ್ರ ನಟ ಪ್ರಕಾಶ್ ರೈ ಈ ಮಣ್ಣಿನ ಮಗ. ಅವರನ್ನು ವಿರೋಧಿಸಲು ಯಾರಿಗೂ ಹಕ್ಕಿಲ್ಲ. ಅವರು ಕರಾವಳಿ ಉತ್ಸವ ಉದ್ಘಾಟನೆಗೆ ಮಂಗಳೂರಿಗೆ ಬಂದೇ ಬರುತ್ತಾರೆ. ತಾಕತ್ತಿದ್ದರೆ ಅವರನ್ನು ತಡೆಯಲಿ ನೋಡೋಣ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದ್ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.

ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನಿಂದ ಲೇಡಿಹಿಲ್ ಸಮೀಪದ ಕರಾವಳಿ ಉತ್ಸವ ಮೈದಾನದಲ್ಲಿ ಆರಂಭಗೊಳ್ಳಲಿ ರುವ ಕರಾವಳಿ ಉತ್ಸವ ಉದ್ಘಾಟನೆಗೆ ನಟ ಪ್ರಕಾಶ್ ರೈ ಆಗಮನ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿರುವ ಬಗ್ಗೆ ಈ ಸವಾಲು ಹಾಕಿದರು.

ಅವರು ಹೇಳಿದ ಹಾಗೆ ಮಾತನಾಡಬೇಕು. ಬಟ್ಟೆ ತೊಡಬೇಕು. ಆಹಾರ ತಿನ್ನಬೇಕು ಎಂದು ಹೇಳಲು ಇದೇನು ಹಿಟ್ಲರ್ ಆಡಳಿತವೇ ಎಂದು ಪ್ರಶ್ನಿಸಿದ ಖಾದರ್, ಪ್ರಕಾಶ್ ರೈ ಬರಬಾರದೆಂದು ಹೇಳಲು ಇವರ್ಯಾರು ಎಂದು ಪ್ರಶ್ನಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English