ಅಮಿತ್ ಷಾ ಪ್ರವಾಸದ ತಿಳಿದು ಕಾಂಗ್ರೆಸ್‌ ಹುಲಿಗಳು ಗುಹೆ ಸೇರಿವೆ: ನಳಿನ್‌ ಕಟೀಲ್ ಲೇವಡಿ

10:28 AM, Monday, February 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

nalin-kumarಮಂಗಳೂರು: ಅಮಿತ್ ಷಾ ನಾಳೆ ಕರಾವಳಿಯಲ್ಲಿ ಪ್ರವಾಸ ಕೈಗೊಳ್ಳಲಿರುವ ಮಾಹಿತಿ ತಿಳಿದು ಕಾಂಗ್ರೆಸ್ ಹುಲಿಗಳು ಗುಹೆ ಸೇರಿದ್ದಾರೆ ಎಂದು ಬಿಜೆಪಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಲೇವಡಿ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ನಾಳೆ ಅಮಿತ್ ಷಾ ಕರಾವಳಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವಿಷಯ ತಿಳಿದ ಕಾಂಗ್ರೆಸ್ ಹುಲಿಗಳು ಗುಹೆ ಸೇರಿಕೊಂಡಿದ್ದಾರೆ. ಷಾ ಬಗ್ಗೆ ಕಾಂಗ್ರೆಸ್ ಮುಖಂಡರು ಬೇರೆ ಬೇರೆ ಹೇಳಿಕೆ ನೀಡುತ್ತಿರುತ್ತಾರೆ. ಈ ಹೇಳಿಕೆಗಳಿಂದಲೇ ಅಮಿತ್ ಷಾ ಬಗ್ಗೆ ‌ಕಾಂಗ್ರೆಸ್‌ಗೆ ಭಯವಿದೆ‌ ಎಂದು ಗೊತ್ತಾಗಿದೆ ಎಂದಿದ್ದಾರೆ.

ಅಮಿತ್‌ ಷಾ ಕುರಿತು ದಿನೇಶ್ ಗುಂಡೂರಾವ್, ಖಾದರ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ನಳೀನ್‌ ಕುಮಾರ್‌, ಅತಿ ಹೆಚ್ಚು ಕೋಮುಗಲಭೆ, ಅತೀ ಹೆಚ್ಚು ಗ್ಯಾಂಗ್ ವಾರ್ ನಡೆದಿರುವುದು ಕಾಂಗ್ರೆಸ್ ಅವಧಿಯಲ್ಲಿಯೇ , ಅದರಲ್ಲೂ ಮಂಗಳೂರಿನಲ್ಲಿ ರಮನಾಥ ರೈ ಗೃಹ ಸಚಿವರಾಗಿದ್ದಾಗ ಹೆಚ್ಚು ಕೋಮುಗಲಭೆಯುಂಟಾಗಿದೆ ಎಂದು ಕಿಡಿಕಾರಿದರು.

ರಾಜ್ಯಕ್ಕೆ ಅಮಿತ್ ಷಾ ಬಂದು ಹೋದಾಗ ಕೋಮುಗಲಭೆಯಾಗಿಲ್ಲ. ಆದರೆ ಸಿಎಂ ಕಾಲಿಟ್ಟಲ್ಲಿ‌ ಮಾತ್ರ ಹತ್ಯೆ ನಡೆಯುತ್ತಿರುತ್ತವೆ. ಇದನ್ನೆಲ್ಲ ಗಮನಿಸಿ ಕಾಂಗ್ರೆಸ್ ನಾಯಕರು‌ ಜವಾಬ್ದಾರಿಯಿಂದ ಹೇಳಿಕೆ ನೀಡಲಿ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English