ಮೂಡುಬಿದಿರೆ: ಮಂಗಳೂರಿನ ಎಸ್ಡಿಎಂ ಕಾನೂನು ಕಾಲೇಜಿನ ಆಶ್ರಯದಲ್ಲಿ ನಡೆದ ಯಕ್ಷೋತ್ಸವ 2018 ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ `ಸುದರ್ಶನ ವಿಜಯ’ ಪ್ರಥಮ ಪ್ರಶಸ್ತಿಯನ್ನು ಪಡೆಯುವುದರ ಮೂಲಕ ಸತತ ಮೂರು ವರ್ಷಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ.
ಪ್ರಶಸ್ತಿಯು ಪರ್ಯಾಯ ಫಲಕ, 5 ಸಾವಿರ ರೂಪಾಯಿ ನಗದು ಒಳಗೊಂಡಿದೆ.
ಆಳ್ವಾಸ್ ವಿದ್ಯಾರ್ಥಿಗಳಾದ ಶಿವರಾಜ ಬಜಕೂಡ್ಲು ಅತ್ಯುತ್ತಮ ಪುಂಡುವೇಷ, ಪ್ರತೀಕ್ಷಾ ಅತ್ಯುತ್ತಮ ಹಾಸ್ಯ ಪ್ರಶಸ್ತಿಯನ್ನು ಪಡೆದರು. ಶೇಖರ್ ಶೆಟ್ಟಿಗಾರ್ ಅರ್ಥ ವಿನ್ಯಾಸ ,ಮಾರ್ಗದರ್ಶನದಲ್ಲಿ ಪ್ರಸಾದ್ ಚೇರ್ಕಾಡಿ ಅವರು ನಿರ್ದೇಶಿಸಿದರು.
ಯಕ್ಷೋತ್ಸವದಲ್ಲಿ 8 ಕಾಲೇಜಿನ ತಂಡಗಳು ಭಾಗವಹಿಸಿದ್ದು, ಗೋವಿಂದದಾಸ್ ಕಾಲೇಜು ಸುರತ್ಕಲ್ ದ್ವಿತೀಯ, ಎಸ್ಡಿಎಂ ಕಾಲೇಜು ಉಜಿರೆ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ.
Click this button or press Ctrl+G to toggle between Kannada and English