ಕರ್ನಾಟಕದಲ್ಲಿ ಭಾಷಣ ಬಿಗಿಯುವ ಬದಲು, ಉತ್ತರ ಪ್ರದೇಶದ ಬಗ್ಗೆ ಯೋಗಿ ತಲೆಕೆಡಿಸಿಕೊಳ್ಳಲಿ: ಸಿದ್ದರಾಮಯ್ಯ

1:20 PM, Thursday, March 15th, 2018
Share
1 Star2 Stars3 Stars4 Stars5 Stars
(No Ratings Yet)
Loading...

siddaramaihಬೆಂಗಳೂರು: ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಭಾಷಣ ಬಿಗಿಯುವ ಬದಲು, ಉತ್ತರ ಪ್ರದೇಶದ ಬಗ್ಗೆ ಯೋಗಿ ತಲೆಕೆಡಿಸಿಕೊಳ್ಳಲಿ ಎಂದು ಸಿದ್ದರಾಮಯ್ಯ ಟ್ವಿಟರ್ ಮೂಲಕ ವ್ಯಂಗ್ಯವಾಡಿದ್ದಾರೆ.

ಈ ಹಿಂದೆಯೂ ಟ್ವಿಟರ್‌‌ನಲ್ಲಿ ಪರಸ್ಪರ ಇಬ್ಬರು ಮುಖಂಡರು ವಾಗ್ದಾಳಿ ನಡೆಸಿದ್ದರು. ಈಗ ಯೋಗಿ ತವರು ಕ್ಷೇತ್ರ ಗೋರಖ್‌ಪುರದಲ್ಲಿ ಬಿಜೆಪಿ ಸೊಲುಂಡಿರುವುದ್ದಕ್ಕೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಉತ್ತರ ಪ್ರದೇಶದ ಅಭಿವೃದ್ಧಿಯ ಬಗ್ಗೆ ಗಮನ ಕೊಡದೆ, ಕರ್ನಾಟದಲ್ಲಿ ಬಂದು ಭಾಷಣ ಬಿಗಿಯುವುದನ್ನು ಕಮ್ಮಿ ಮಾಡಿ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಜೊತೆಗೆ ಉಪ ಚುನಾವಣೆಗೆಯಲ್ಲಿ ಗೆಲುವು ಸಾಧಿಸಿರುವ ಎಸ್‌‌ಪಿ ಹಾಗೂ ಬಿಎಸ್‌‌‌‌‌ಪಿಗೆ ಸಿಎಂ ಶುಭಾಶಯಗಳನ್ನು ತಿಳಿಸಿದ್ದಾರೆ. ಬಿಜೆಪಿಯೇತರ ಪಕ್ಷಗಳು ಒಂದಾಗಿರುವುದರಿಂದ ಗೆಲುವು ದಕ್ಕಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಎರಡು ಬಾರಿ ಯುಪಿ ಸಿಎಂ ಕರ್ನಾಟಕಕ್ಕೆ ಭೇಟಿ ನೀಡಿದಾಗಲೂ ಸಿದ್ದರಾಮಯ್ಯ ಹಾಗೂ ಯೋಗಿ ಮಧ್ಯೆ ಟ್ವಿಟರ್‌‌ನಲ್ಲಿ ಟ್ವೀಟ್ಯುದ್ಧ ನಡೆದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English