ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚನೆ: ಸ್ಯಾಂಡಲ್‌‌ವುಡ್ ನಟನ ವಿರುದ್ಧ ದೂರು ನೀಡಿದ ಮಾಡೆಲ್‌

2:41 PM, Tuesday, April 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kiranrajಬೆಂಗಳೂರು: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಇದೀಗ ನನಗೆ ವಂಚನೆ ಮಾಡಿದ್ದಾರೆ ಎಂದು ಮಾಡೆಲ್‌ವೊಬ್ಬರು ಸ್ಯಾಂಡಲ್‌‌‌ವುಡ್‌‌ ನಟನ ವಿರುದ್ಧ ಆರೋಪ ಮಾಡಿದ್ದಾರೆ.

ಮುಂಬೈ ಮೂಲದ ನಟಿ, ಮಾಡೆಲ್‌ ಹಾಗೂ ಕಿನ್ನರಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್‌ ಕಳೆದ 5 ವರ್ಷಗಳಿಂದ ಲಿವ್‌ ಇನ್‌ ರಿಲೇಶನ್‌‌‌‌ನಲ್ಲಿದ್ದರು ಎನ್ನಲಾಗಿದೆ. ಇದೀಗ ಕಿರಣ್ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಮಾಡೆಲ್‌‌‌‌ ಬೆಂಗಳೂರಿನ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಆಕೆ ಮೇಲೆ ಕಿರಣ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

kiranraj-3ಮಾರ್ಚ್‌‌‌‌‌ 29 ರಂದು ಆಕೆ ಮದುವೆ ಬಗ್ಗೆ ಮಾತನಾಡಲು ಮುಂಬೈನಿಂದ ಬೆಂಗಳೂರಿಗೆ ಬಂದಿದ್ದು ಕಿರಣ್ ಒಡೆತನದ ಹೋಟೆಲ್‌‌ವೊಂದರಲ್ಲಿ ಇಬ್ಬರೂ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮದುವೆಗೆ ಒಪ್ಪದ ಕಿರಣ್‌‌‌, ಕಾರಿನಲ್ಲೇ ನಟಿ ಮೇಲೆ ಹಲ್ಲೆ ಮಾಡಿದ್ದಾರೆ. ಆ ನಂತರ ಆಕೆಯನ್ನು ರಾಜರಾಜೇಶ್ವರಿ ನಗರದ ಚೆನ್ನಸಂದ್ರದ ತನ್ನ ಮನೆಗೆ ಕರೆತಂದು ರೂಂ ಒಂದರಲ್ಲಿ ಕೂಡಿ ಹಾಕಿದ್ದಲ್ಲದೆ ಅಲ್ಲಿ ಕೂಡಾ ಹಲ್ಲೆ ಮಾಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

kiranraj-2ನಂತರ ಪೊಲೀಸರಿಗೆ ದೂರು ನೀಡದಂತೆ ಎಚ್ಚರಿಸಿದ ಕಿರಣ್‌‌ ಆಕೆಯನ್ನು ಬಲವಂತವಾಗಿ ಮುಂಬೈಗೆ ಕಳಿಸಿದ್ದರು ಎನ್ನಲಾಗಿದೆ. ದೈಹಿಕ ಹಲ್ಲೆಯಿಂದ ನೊಂದ ನಟಿ ಮುಂಬೈನ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದು, ಹಲ್ಲೆ ನಡೆದಿರುವುದು ಬೆಂಗಳೂರಿನಲ್ಲಾದ್ದರಿಂದ ಅಲ್ಲೇ ದೂರು ಕೊಡುವಂತೆ ಓಶಿವಾರ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ.

ದೂರಿನ ಹಿನ್ನೆಲೆ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿರಣ್ ರಾಜ್‌‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇವರಿಬ್ಬರ ಜಗಳದಿಂದ ನಟಿ ಕಾರು ಕೂಡಾ ಜಖಂ ಆಗಿದೆ. ಸುಮಾರು 45 ನಿಮಿಷಗಳ ಕಾಲ ಕಿರಣ್‌‌ನನ್ನು ವಿಚಾರಣೆ ನಡೆಸಿದ ಪೊಲೀಸರು ಸ್ಥಳ ಮಹಜರ್‌‌‌‌ಗೆ ಕೂಡಾ ಕಿರಣ್‌‌‌ನನ್ನು ಕರೆದೊಯ್ದಿದ್ದಾರೆ. ಮಹಜರ್ ಮುಗಿಸಿ ಬಂದ ನಂತರ ಮತ್ತೆ ವಿಚಾರಣೆ ನಡೆಸಲಾಗುತ್ತಿದೆ.

‘ಅಸತೋಮಾ ಸದ್ಗಮಯ’ ಸಿನಿಮಾದಲ್ಲಿ ಕೂಡಾ ಕಿರಣ್ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಿರಣ್‌ ಮುಂಬೈಗೆ ತರಬೇತಿಯೊಂದಕ್ಕೆ ತೆರಳಿದ್ದಾಗ ನಟಿಯ ಪರಿಚಯವಾಗಿದ್ದು, ಮುಂಬೈನ ಓಶಿವಾರದ ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English