ಸುಪ್ರೀಂ ಕೋರ್ಟ್‌ನಿಂದ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ!

3:06 PM, Friday, April 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

davoodನವದೆಹಲಿ: ಭೂಗತ ಪಾತಕಿ ದಾವೂದ್‌‌ ಇಬ್ರಾಹಿಂ ಆಸ್ತಿ ಜಪ್ತಿ ಮಾಡಿಕೊಳ್ಳವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ದಾವೂದ್‌‌ ತನ್ನ ‘ಅಪರಾಧಿ ಕೃತ್ಯಗಳಿಂದ ಸಂಪಾದಿಸಿರುವ ಆಸ್ತಿ’ಯನ್ನು ಜಾರಿ ನಿರ್ದೇಶನಾಲಯ ಮತ್ತಿತರ ಸಂಸ್ಥೆಗಳು ವಶ ಪಡೆಸಿಕೊಳ್ಳವುದನ್ನು ಪ್ರಶ್ನಿಸಿ, ತಾಯಿ ಅಮಿನಾಬೀ ಕಸ್ಕರ್‌ ಮತ್ತು ಸಹೋದರಿ ಆಸೀನಾ ಪರ್ಕರ್‌ ಅರ್ಜಿ ಸಲ್ಲಿಸಿದ್ದರು.

ಆದರೆ, ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಆರ್‌.ಕೆ. ಅಗರ್ವಾಲ್‌ ನೇತೃತ್ವದ ನ್ಯಾಯಪೀಠ, ಪಾತಕಿಗೆ ಸೇರಿದ ಮುಂಬೈಯ ಆಸ್ತಿ ಜಪ್ತಿ ಮಾಡುವಂತೆ ಕೇಂದ್ರಕ್ಕೆ ನಿರ್ದೇಶಿಸಿದೆ.

1993ರ ಮುಂಬೈ ಸರಣಿ ಬಾಂಬ್‌‌ ಸ್ಫೋಟದ ಮಾಸ್ಟರ್‌‌ ಮೈಂಡ್‌ ಆಗಿರುವ ದಾವೂದ್‌ ಇಬ್ರಾಹಿಂನನ್ನು ಜಾಗತಿಕ ಉಗ್ರ ಎಂದು ಘೋಷಿಸಲಾಗಿದೆ. ಹಲವು ಕೊಲೆ, ಸುಲಿಗೆ, ಭಯೋತ್ಪಾದನೆ ಮತ್ತು ಡ್ರಗ್ಸ್‌ ಕಳ್ಳಸಾಗಣೆ ಪ್ರಕರಣಗಳಲ್ಲಿ ಬೇಕಾಗಿದ್ದಾನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English