ನಿನ್ನೆ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ದ.ಕ.ಜಿಲ್ಲೆಯಲ್ಲಿ 20 ಕೋಟಿ ರೂ. ನಷ್ಟ: ಸಸಿಕಾಂತ್ ಸೆಂಥಿಲ್

5:49 PM, Wednesday, May 30th, 2018
Share
1 Star2 Stars3 Stars4 Stars5 Stars
(No Ratings Yet)
Loading...

sesikanth-senthil.-2ಮಂಗಳೂರು: ನಿನ್ನೆ ಜಿಲ್ಲೆಯಾದ್ಯಂತ ಸುರಿದ ಮಹಾಮಳೆಗೆ ದ.ಕ. ಜಿಲ್ಲೆಯಲ್ಲಿ 20 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಆಸ್ತಿಗಳಾದ ರಸ್ತೆ ಮತ್ತು ಸೇತುವೆ ಡ್ಯಾಮೆಜ್ ನಿಂದ 4 ಕೋಟಿ ನಷ್ಟ ಸಂಭವಿಸಿದೆ. ಖಾಸಗಿ ಆಸ್ತಿಗಳಾದ ಮನೆ 3.7 ಕೋಟಿ ‌ನಷ್ಟ, ವಿದ್ಯುತ್ ಸಂಪರ್ಕ 1.9 ಕೋಟಿ ಮತ್ತು ಇತರ ಸೇರಿದಂತೆ 20 ಕೋಟಿ ನಷ್ಟ ಸಂಭವಿಸಿದೆ.

ರಾಜಾಕಾಲುವೆ ಯಿಂದ ನೀರು ಸರಾಗವಾಗಿ ಹೋಗಲು ಅನಾನುಕೂಲ ವಾಗುವ ಬಗ್ಗೆ ವರದಿ ನೀಡಲು ಮೂಡ ಕಮೀಷನರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮೂರು ದಿನಗಳಲ್ಲಿ ವರದಿ ಬರಲಿದೆ. ಈ ವರದಿಯಲ್ಲಿ ರಾಜಾಕಾಲುವೆ ಅತಿಕ್ರಮಣ ಕಂಡುಬಂದರೆ ಅದನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English