ಭಾರಿ ಮಳೆಗೆ ನದಿ ನೀರಿನ ಮಟ್ಟ ಏರಿಕೆ..ಶಾಲೆಗೆ ಇಂದು ಕೂಡ ರಜೆ‌‌ ಘೋಷಣೆ..!

12:55 PM, Saturday, June 9th, 2018
Share
1 Star2 Stars3 Stars4 Stars5 Stars
(No Ratings Yet)
Loading...

heavy-rainಮಂಗಳೂರು: ಕರಾವಳಿ ಮಂಗಳೂರಿನಲ್ಲಿ ಎರಡು ದಿನಗಳಿಂದ ಆರಂಭವಾದ ಮಳೆಯ ಆರ್ಭಟ ಮುಂದುವರಿದಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಗಾಳಿ ಮಳೆಯ ರಭಸಕ್ಕೆ ಹಲವೆಡೆ ಮರಗಳು ನೆಲಕ್ಕುರುಳಿದೆ.

heavy-rain-2ಭಾರಿ ಮಳೆಗೆ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಅಲ್ಲದೆ ಶಾಲೆಗೆ ಇಂದು ಕೂಡ ರಜೆ‌‌ ಘೋಷಿಸಲಾಗಿದೆ. ಇತ್ತ ಭಾರಿ ಮಳೆಗೆ ಹಳೆ ಕಟ್ಟಡ ಹಾಗೂ ಮರಗಳು ನೆಲಕ್ಕುರುಳಿದೆ.

heavy-rain-3ಮಂಗಳೂರಿನ ಕಾರ್ ಸ್ಟ್ರೀಟ್‌‌ನಲ್ಲಿ ಹಳೆಯ ಕಟ್ಟಡವೊಂದರ ಮೇಲಿನ ಅಂತಸ್ತು ಕುಸಿದಿದ್ದು, ಕಟ್ಟಡದ ಹೊರಗೆ ನಿಲ್ಲಿಸಲಾಗಿದ್ದ ಎರಡು ಬೈಕ್ ಗಳಿಗೆ ಹಾನಿಯಾಗಿದೆ. ಅಲ್ಲದೆ ಜಿಲ್ಲೆಯ ಹಲವೆಡೆ ಮರಗಳು ರಸ್ತೆಗೆ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English