ಕೆಲವೇ ಕೆಲವು ಸಮಾಜದ್ರೋಹಿಗಳಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ: ವಿಪುಲ್ ಕುಮಾರ್

3:03 PM, Monday, June 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

vipul-kumarಮಂಗಳೂರು: ನಗರದ ನೂತನ ಪೊಲೀಸ್ ಕಮೀಷನರ್ ಆಗಿ ಸುರೇಶ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು. ಚುನಾವಣೆ ನಿಮಿತ್ತ ವರ್ಗಾವಣೆಗೊಂಡಿದ್ದ ಸುರೇಶ್ ಕುಮಾರ್ ಅವರು ಮತ್ತೆ ಮಂಗಳೂರಿಗೆ ಪೊಲೀಸ್ ಕಮೀಷನರ್ ಆಗಿ ಬಂದಿದ್ದು ನಿರ್ಗಮನ ಪೊಲೀಸ್ ಕಮೀಷನರ್ ವಿಪುಲ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು.

ಮಂಗಳೂರು ಪೊಲೀಸ್ ಕಮೀಷನರ್ ಹುದ್ದೆಯಿಂದ ವರ್ಗಾವಣೆ ಗೊಂಡಿರುವ ವಿಪುಲ್ ಕುಮಾರ್ ಅವರು ಇಂದು ಅಧಿಕಾರ ಹಸ್ತಾಂತರಕ್ಕೆ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿ, ಮಂಗಳೂರು ಮತ್ತು ಮಂಗಳೂರಿಗರ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಂಗಳೂರು ಬಗ್ಗೆ ಕೋಮುದ್ವೇಷ ನಡೆಯುತ್ತದೆ ಎಂಬ ಕೆಟ್ಟ ಹೆಸರಿದೆ. ನನ್ನ ಅನುಭವದ ಪ್ರಕಾರ ಕೆಲವೊಂದು ಘಟನೆಗಳು ನಡೆಯುತ್ತದೆ. ಆದರೆ ಮಂಗಳೂರಿನ ಹೆಚ್ಚಿನ ಜನರಿಗೆ ಶಾಂತಿ ಬೇಕಾಗಿದೆ. ಕೆಲವೇ ಕೆಲವು ಸಮಾಜದ್ರೋಹಿಗಳಿಂದ ಮಂಗಳೂರಿಗೆ ಕೆಟ್ಟ ಹೆಸರು ಬಂದಿದೆ. ಅಂತಹ ಸಮಾಜ ದ್ರೋಹಿಗಳ ವಿರುದ್ಧದ ಕ್ರಮ ಕೈಗೊಳ್ಳಲು ಮಂಗಳೂರು ಪೊಲೀಸರು ಸಮರ್ಥರಿದ್ದಾರೆ ಎಂದು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English