13 ಅಡಿ ಕಾಳಿಂಗ ಸರ್ಪವನ್ನು ಹಿಡಿದು ಚಾರ್ಮಾಡಿ ಘಾಟ್ ಗೆ ಬಿಟ್ಟ ಉರಗ ತಜ್ಞ ಜಾಯ್ ಮಸ್ಕರೇನಸ್!

6:24 PM, Monday, June 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

mangaluruಮಂಗಳೂರು: ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದಲ್ಲಿ ರಸ್ತೆ ಪಕ್ಕದ ಬೇಲಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಹದಿಮೂರು ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞರು ರಕ್ಷಿಸಿದ್ದಾರೆ. ಕಾಳಿಂಗ ಸರ್ಪವು ಸವಣಾಲು- ಅಯಿಲಹದಿಮೆ ರಸ್ತೆಯಲ್ಲಿ ಬೇಲಿಯಿಂದ ಹೊರಬರಲು ಹೆಣಗುತ್ತಿದ್ದ ಕಾಳಿಂಗ ಸರ್ಪವನ್ನು ಗ್ರಾಮಸ್ಥರು ನೋಡಿದ್ದಾರೆ.

ಆ ಕೂಡಲೇ ಉರಗ ತಜ್ಞ ಜಾಯ್ ಮಸ್ಕರೇನಸ್ (ಸ್ನೇಕ್ ಜಾಯ್ ಅಂತಲೇ ಹೆಸರುವಾಸಿ)ಗೆ ವಿಷಯ ತಲುಪಿಸಿದ್ದಾರೆ.

ಹಾವು ಹಿಡಿಯುವ ಕೋಲು ಹಾಗೂ ಚೀಲದೊಂದಿಗೆ ಜಾಯ್ ಸ್ಥಳಕ್ಕೆ ತಲುಪಿದ್ದಾರೆ. ಅಪಾಯಕಾರಿ ವಿಷಜಂತುವಾದ ಕಾಳಿಂಗ ಸರ್ಪವನ್ನು ಬೇಲಿಯಿಂದ ಮೊದಲಿಗೆ ಬಿಡಿಸಬೇಕಿತ್ತು. ಆ ಕೆಲಸವನ್ನು ಜಾಯ್ ಯಶಸ್ವಿಯಾಗಿ ಮಾಡಿದರು. ಆ ನಂತರ ತುಂಬ ಚಾಕಚಕ್ಯತೆಯಿಂದ ಅದನ್ನು ಚೀಲದೊಳಗೆ ತುಂಬಿಕೊಂಡರು. ಆ ನಂತರ ಚಾರ್ಮಾಡಿ ಘಾಟ್ ನ ಅರಣ್ಯ ಪ್ರದೇಶದೊಳಗೆ ಬಿಟ್ಟರು.

ಇಷ್ಟು ಕೆಲಸ ಈ ವರದಿ ಮಾಡಿದಷ್ಟು ಸಲೀಸಂತೂ ಖಂಡಿತಾ ಅಲ್ಲ. ಆದರೆ ಸ್ನೇಕ್ ಜಾಯ್ ಪಾಲಿಗೆ ಸಮಾಜ ಸೇವೆ ಹಾಗೂ ಪ್ರತಿ ನಿತ್ಯವೂ ಎದುರಿಸುವ ಸವಾಲು. ಇಷ್ಟೆಲ್ಲ ಆಗಿದ್ದು ಜೂನ್ ಹದಿನೆಂಟನೇ ತಾರೀಕಿನ ಸೋಮವಾರ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English