ಬ್ರಾಹ್ಮಣನಲ್ಲ ಎಂದು ಈಶ ವಿಠಲದಾಸ ಸ್ವಾಮೀಜಿಯವರನ್ನು ಅವಮಾನಿ ಸಿದ ಮುಂಡ್ಕೂರು ಅರ್ಚಕ

Monday, February 12th, 2018
Esa vitala dasa

ಮಂಗಳೂರು : ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಯವರನ್ನು ಜಾತೀಯ ಕಾರಣದಿಂದ  ಅರ್ಚಕ ರೊಬ್ಬರು  ಪ್ರಸಾದ ನೀಡದೆ ಅವಮಾನ ಮಡಿದ ಘಟನೆ ಕಾರ್ಕಳ ಸಮೀಪದ ಮುಂಡ್ಕೂರು ಎಂಬಲ್ಲಿ ನಡೆದಿದೆ. ಕಾರ್ಕಳ ಸಮೀಪದ ಮುಂಡ್ಕೂರು  ದೇವಸ್ಥಾನದಲ್ಲಿ ಕೇಮಾರು ಶ್ರೀಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿಯವರ ನೇತೃತ್ವದಲ್ಲಿ ಕಳೆದ ಹದಿಮೂರು ವರ್ಷಗಳಿಂದ  ಶನೇಶ್ವರನ ಪೂಜೆ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಸಚ್ಚರಿಪೇಟೆಯ ಸಾರ್ವಜನಿಕ ಶನೇಶ್ವರನ ಪೂಜಾ ಸೇವಾ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಆಶ್ರಯದಲ್ಲಿ ಹದಿನಾಲ್ಕನೇ ವರ್ಷದ ಶನೇಶ್ವರನ ಪೂಜಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. […]